ಭಾನುವಾರ, ನವೆಂಬರ್ 10, 2013

ಜಂಗಮ ಮಹಾಸಭಾ ನಿಭಂದನಾ ಪತ್ರಿಕೆ



ಅಖಿಲ ಭಾರತ 
ವೀರಶೈವ ಜಂಗಮ ಸಮಾಜ ಮಹಾಸಭಾ
  ನಿಭಂದನಾ ಪತ್ರಿಕೆ    
===================


1) ಸಂಸ್ಥೆಯ ಹೆಸರು : ಅಖಿಲ ಭಾರತ ವೀರಶೈವ ಜಂಗಮ ಸಮಾಜ ಮಹಾಸಭಾ

2)  ನೊಂದಾಯಿತ ಕಚೇರಿ ಸಂಪೂರ್ಣ ವಿಳಾಸ :

3)  ಸಂಸ್ಥೆಯ ವ್ಯಾಪ್ತಿ : ಭಾರತ ದೇಶವನ್ನು ಒಳಗೊಂಡಿರುತ್ತದೆ.

4) ಸದಸ್ಯತ್ವ ವರ್ಗೀಕರಣ ಹಾಗೂ ಶುಲ್ಕ ವಿವರ : ಈ ಮಹಾ ಸಭೆಯ ಸದಸ್ಯತ್ವ 5 ವಿಧದಲ್ಲಿ ವರ್ಗೀಕರಿಸಲಾಗಿದೆ 
1. ಸಾಮನ್ಯ ಸದಸ್ಯತ್ವ 2. ಅಜೀವ ಸದಸ್ಯತ್ವ 3. ದಾನಿಗಳು 4. ಪೋಷಕರು 5. ಮಹಾಪೋಷಕರು. ಸದಸ್ಯತ್ವ ಶುಲ್ಕವಿವರ : 1) ಸಾಮನ್ಯ : ವ್ಯೆಕ್ತಿಗೆ 51/-ರೂ. ಕುಟುಂಬಕ್ಕೆ 108/-ರೂ. 2)ಆಜೀವ : ವ್ಯೆಕ್ತಿಗೆ 251/-ರೂ. ಕುಟುಂಬಕ್ಕೆ 501/-ರೂ.
3) ದಾನಿಗಳು : ವ್ಯೆಕ್ತಿಗೆ 1008/-ರೂ. ಕುಟುಂಬಕ್ಕೆ 2501/-ರೂ.4) ಪೋಷಕರು : ವ್ಯೆಕ್ತಿಗೆ 5,555/-ರೂ. ಸಂಘ-ಸಂಸ್ಥೆಗಳಿಗೆ 11,111/- ರೂ.5) ಮಹಾಪೋಷಕರು : ವ್ಯೆಕ್ತಿಗೆ 11,111/- ರೂ. ಸಂಘ-ಸಂಸ್ಥೆಗಳಿಗೆ 21,111/- ರೂ. ಪೀಠಾಧೀಶರಿಗೆ 51,551/-ರೂ . ಪ್ರವೇಶ ಶುಲ್ಕ : 10/-ರೂ.

5) ಸಂಸ್ಥೆಯ ಸದಸ್ಯತ್ವ ಪಡೆಯುವ ವಿಧಾನ : 2) ಈ ಸಮಿತಿಯ ಸದಸ್ಯರಾಗಲು ಕನಿಷ್ಟ 18 ವರ್ಷ ವಯಸ್ಸು ಪೂರ್ಣವಾಗಿರಬೇಕು. ರಾಜ್ಯದ ಹೊರರಾಜ್ಯದ ದೇಶ ವಿದೇಶದ ವೀರಶೈವ ಜಂಗಮರು ಕೂಡಾ ಸದಸ್ಯರಾಗ ಬಹುದುರಾಜ್ಯದ ಹೊರಗಿನವರಿಗೆ ಕಾರ್ಯಕಾರಣಿ ಮಂಡಳಿಯಲ್ಲಿ ಪದಾದಿಕಾರಿ ಯಾಗಲು ಅವಕಾಶ ಇರುವುದಿಲ್ಲ ಸಲಹಾಸಮಿತಿಯಲ್ಲಿ ನೇಮಕ ಮಾಡಿಕೊಳ್ಳ ಬಹುದು. ಆದರೆ ಕರ್ನಾಟಕದ ಹೊರಗಿನವರುಶಾಖೆಗಳನ್ನು ಸ್ಥಾಪಿಸಿ ಕೊಳ್ಳಬಹುದು.2) ಸಮಿತಿಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿಶ್ವಾಸ, ನಿಷ್ಠೆಯುಳ್ಳವರಾಗಿರಬೆಕು. 3) ಉತ್ತಮ ಚಾರಿತ್ರ್ಯೆ ಹೊಂದಿರುವ ಧರ್ಮದಲ್ಲಿ ನಿಷ್ಠೆಯುಳ್ಳವರು ಪರಂಪರೆಯನ್ನು ಗೌರವಿಸುವವರುಆಗಿರಬೇಕು. ವೀರಶೈವ ಧರ್ಮ ದವರಾಗಿರಬೇಕು.

6) ಸಂಸ್ಥೆಯ ಸದಸ್ಯತ್ವ ಪಡೆಯುವ ವಿಧಾನ : ಈ ಮಹಾಸಭೆಯ ಸದಸ್ಯರಾಗಬೇಕೆನ್ನುವವರು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ವಿವರ (ಅಪೇಕ್ಷಾ ಪತ್ರ ) ತುಂಬಿ ಸದಸ್ಯತ್ವ ವಂತಿಕೆ ಹಣದೊಂದಿಗೆ ರೂಪಾಯಿ ೨೫-೦೦ ಪ್ರವೇಶ ಧನದೊಂದಿಗೆ ಕೊಡತಕ್ಕದ್ದು. ಕಾರ್ಯಕಾರಣಿ ಮಂಡಳಿಯು ಅಪೇಕ್ಷ ಪತ್ರವನ್ನು ಪರಿಶೀಲಿಸಿ ಒಪ್ಪಬಹುದು ಇಲ್ಲವೇ ತಿರಸ್ಕರಿಸಬಹುದು ತಿರಸ್ಕೃತ ಅರ್ಜಿದಾರರ ವಂತಿಕೆ ಹಣವನ್ನು ಹಿಂದುರಿಗಿಸಲಾಗುವುದು ಅದರೆ ಪ್ರವೇಶ ಶುಲ್ಕ ವಾಪಸು ಕೊಡುವುದಿಲ್ಲ.
7) ಸದಸ್ಯತ್ವ ರದ್ದಾಗುವಿಕೆ : ಈ ಕೆಳಕಂಡ ಕಾರಣಗಳಿಂದ ಸದಸ್ಯತ್ವ ರದ್ದಾಗುತ್ತದೆ.1) ಸದಸ್ಯರು ಮರಣಹೊಂದಿದರೆ. 
2) ಊರು ಬಿಟ್ಟು ಹೋದರೆ 3) ಬುದ್ದಿ ಬ್ರಮಣೆಯಾದರೆ 4) ರಾಜಿನಾಮೆ ಕೊಟ್ಟರೆ 5) ಹೆಚ್ಚಿನವಧಿಗೆ ವಂತಿಕೆ ಸಲ್ಲಿಸದಿದ್ದರೆ 
6) ಯಾವದೆವರ್ಗದ ಸದಸ್ಯತ್ವವು ಅವರ ದುರ್ನಡತೆಗೆ , ಅನೈತಿಕ ವರ್ತನೆ ಬಗ್ಗೆ ಇಲ್ಲವೇ ಮಹಾ ಸಭೆಯ ಹಿತಾಸಕ್ತಿಯ ವಿರುಧ್ಧವಾದ ನಡವಳಿಕೆಗಳ ಆರೋಪದ ಮೇರೆಗೆ ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ 2:3 ಭಾಗ ಸದಸ್ಯರು ಅನುಮತಿಕೊಟ್ಟಲ್ಲಿ ರದ್ದಗುವುದು. ಆದರೆ ಮಹಾಸಭೆಯು ಸಭೆ ಸೇರುವ ಮೊದಲು ಅಪಾದಿತ ಸದಸ್ಯರಿಗೆ ಅವರ ವಿರುದ್ಧ ಇರುವ ಅಪಾದನೆಗಳ ವಿವರ ಕೊಟ್ಟು ಲಿಖಿತ ವಿವಿರಣೆ ಸಲ್ಲಿಸಲು ಅವಕಾಶವಿರುತ್ತಕ್ಕದ್ದು ಮತ್ತು ಯೋಗ್ಯ ಕಾಲಾವಧಿ ಕೊಡತಕ್ಕದ್ದು. ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ಆಪಾದನೆ ಪಟ್ಟಿ ಮತ್ತು ಆಪಾದಿತ ಸದಸ್ಯನ ವಿವರರಣೆ ಹಾಜರ ಪಡಿಸತಕ್ಕದ್ದು. ಇಲ್ಲವೆ ಸದಸ್ಯರಿಗೆ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಹೇಳಿಕೊಳ್ಳುವ ಅವಕಾಶವಿರತಕ್ಕದ್ದು. ಆದರೆ ನಿರ್ಣಯ ಕೈಗೊಳ್ಳುವಾಗ ಅಂತ ಸದಸ್ಯನು ಸಭೆಯಿಂದ ಹೊರಗೆ ಇರತಕ್ಕದ್ದು. ಸಾಮಾನ್ಯ ಶೆಯ ನಿರ್ಣಯವೇ ಅಖೈರು ಆಗಿರುತ್ತದೆ.

8) ಆರ್ಥಿಕ ಸಂಪತ್ತು : ಮಹಾಸಭೆಯ ಕಾರ್ಯಕ್ಕೆ ಬೇಕಾಗುವ ಆರ್ಥಿಕ ಸಂಪತ್ತನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು 1) 
ಸದಸ್ಯರಿಂದ ಬಂದ ವಂತಿಕೆ 2) ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ ಕಾಣಿಕೆ ದೇಣಿಗೆ ಅನುದಾನದಿಂದ 3)ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ, ಮಾನ್ಯಮಾಡಿದ ಬ್ಯಾಂಕುಗಳಿಂದ, ಹಣಕಾಸು ಸಂಸ್ಥೆಗಳಿಂದ ,ವಿದೇಶದಲ್ಲಿ ನೆಲಸಿದ ಭಾರತೀಯರಿಂದ, ಶಾಸಕ ಸಂಸದ ರಾಜ್ಯಸಭಾ ಸದಸ್ಯರ ಅನುದಾನದಿಂದ, 4) ಮಹಾಸಭೆಯ ನ್ಯಾಯ ಸಮ್ಮತವಾದ ವ್ಯವಹಾರದಿಂದ, ವೀದೆಶಿ ಸಂಘ ಸಂಸ್ಥೆಗಳಿಂದ ಹಣ ಸಹಾಯ ಪಡೆಯುವುದು, 5) ಆದಾಯಕರ ಕಾನೂನಿನಡಿಯಲ್ಲಿ 80ಜಿ ಅಡಿಯಲ್ಲಿ ಮಾನ್ಯತೆ ಪಡೆಯುವುದು, ಸಂಘ ಸಂಸ್ಥೆಗಳಿಗೆ ನಿಗದಿಪಡಿಸಿದ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುವುದು.

9) ಸಾಮಾನ್ಯ ಸಭೆ ಅಧಿಕಾರ ಮತ್ತು ಕಾರ್ಯವ್ಯಾಪ್ತಿ : ಈ ಮಹಾಸಭೆಗೆ ಒಂದು ಸಾಮಾನ್ಯ ಸಭೆ ಇರತಕ್ಕದ್ದು,
          ಸಾಮಾನ್ಯ  ಸಭೆಯಲ್ಲಿ ಪ್ರತಿಯೊಬ್ಬ ಸದಸ್ಯರು ಭಾಗವಹಿಸಲು ಹಕ್ಕು ಉಳ್ಳವರಾಗಿರುತ್ತಾರೆ. ಈ ಸಾಮಾನ್ಯ ಸಭೆಯು           ಮಾಹಾಸಬೆಯ ಎಲ್ಲ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಪರಮೋಚ್ಚ ಅಧಿಕಾರ ಹೊಂದಿರುತ್ತದೆ. 
  1. ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಸೇರ್ಪಡೆಯಾದಂತಹ ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿರುತ್ತಾರೆ. ಈ ನಿಯಮ ಪ್ರಥಮ ಸಾಮಾನ್ಯ ಸ್ಭೆಯಿಂದಲೇ ಅನ್ವಯವಾಗಿರುತ್ತದೆ. ಸಾಮಾನ್ಯ ಸಭೆಯು ಪ್ರತಿ ವಾರ್ಷಿಕ ವರ್ಷಕ್ಕೆ ಒಂದು ಸಲವಾದರೂ ತಪ್ಪದೇ ಕರ್ಯತಕ್ಕದ್ದು ಅದು ಸಂಸ್ಥೆಯ ವಾರ್ಷಿಕ ವರ್ಷ ಮುಗಿದ ಆರು ತಿಂಗಳ ಒಳಗಾಗಿ ಇರತಕ್ಕದ್ದು.
  2. ಮೂರು ವರ್ಷಕ್ಕೊಮ್ಮೆ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಚುನಾಯಿಸುವ ಮೂಲಕ ಸಾಮಾನ್ಯ ಸಭೆ ನಿರ್ಧರಿಸಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರಿರತಕ್ಕದ್ದು. 
  3.  ಹಿಂದಿನ ವರ್ಷದ ಆರ್ಥಿಕ ಸ್ಥಿತಿ ನಿರ್ಮಿಸುವುದು ಆಡಿಟ್ ಆದ ಲೆಕ್ಕ ಪತ್ರಗಳನ್ನು ಪರಿಸಿಲಿಸಿ ಒಪ್ಪಿಗೆ ಕೊಡುವುದು. 
  4.  ಚಾಲ್ತಿ ವರ್ಷದ ಅಂದಾಜು ಜಮ ಖರ್ಚಿನ ಪಟ್ಟಿ ಹಾಗೂ ಯೋಜನೆಗಳಿಗೆ ವಿವರಗಳನ್ನು ಪರಿಶೀಲಿಸಿ ಒಪ್ಪಿಗೆ ಕೊಡುವುದು.
  5. ಸಂಸ್ಥೆಯ  ಲೆಕ್ಕ ಪತ್ರಗಳನ್ನು ರಜಿಸ್ಟರ್ಡ ಚಾರ್ಟೆಡ್ ಅಕೌಂಟೆಂಟ ರವರ ಕಡೆಯಿಂದ ಪ್ರತಿ ವರ್ಷವೂ ತಪಾಸಣೆ ಮಾಡಿಸಬೇಕು ಆಡಿಟ್ ಪತ್ರಿಕೆ  ಮತ್ತು ಆಡಿಟ್ ರವರು ಆ ಬಗ್ಗೆ ಸಲ್ಲಿಸಿದ ವಿವರವಾದ ವರದಿಯೊಂದಿಗೆ ಸಂಸ್ಥೆಯ ಮಹಾಸಭೆಯಲ್ಲಿ ಮಂಡಿಸಿ ಒಮ್ಮತದಿಂದ ಒಪ್ಪಿಗೆ ಪಡೆದುಕೊಳ್ಳುವುದು. 
  6. ಸಂಸ್ಥೆಯು ಪಡೆಯಬೇಕಾದ ಸಾಲ ಮತ್ತು ಅನುದಾನದ ಬಗ್ಗೆ ಒಪ್ಪಿಗೆ ಕೊಡುವುದು. 
  7. ಪ್ರತಿವರ್ಷ ಲೆಕ್ಕ ಪತ್ರ ಪರಿಶೋಧಿಸುವ ಬಗ್ಗೆ ಆಡಿಟ್ ರನ್ನು ನೆಮಿಸಿಸಲು ಅವರ ಸಂಬಳ ಗೊತ್ತು ಪಡಿಸುವುದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಆಡಳಿತ ಚುನಾಯಿಸಲ್ಪಡುವವರೆಗೆ ಮತ್ತು ಅಧಿಕಾರ ವಹಿಸಿಕೊಳ್ಳುವವರೆಗೆ ಹಿಂದಿನ ಆಡಳಿತ ಮಂಡಳಿಯೇ ಮಹಾಸಭೆಯ ಅಧಿಕಾರದಲ್ಲಿ ಇರುತ್ತದೆ.   
  

ಶನಿವಾರ, ನವೆಂಬರ್ 9, 2013

ಜಂಗಮ ಆರಾಧನೆಯೇ ವೀರಶೈವ ಧರ್ಮದ ಜೀವಾಳ.

ವಿಶ್ವಧರ್ಮವಾದ ವೀರಶೈವ ಧರ್ಮದ ಪ್ರಚಾರಕ ಪ್ರಸಾರಕ ಮತ್ತು ರಕ್ಷಕ ಪ್ರಥಮ ವ್ಯೆಕ್ತಿ ಮತ್ತು ವರ್ಗವೆಂದರೆ ಜಂಗಮ ಮತ್ತು ಜಂಗಮ ಸಮಾಜ. ಕೆಲವು ಅಜ್ಞಾನಿಗಳು ಈ ಜಂಗಮ ಸಮುದಾಯಕ್ಕೆ ಜಾತಿಯ ಪಟ್ಟ ಕಟ್ಟುತ್ತಿದ್ದಾರೆ. ಜಂಗಮ ಒಂದು ಜಾತಿಯಲ್ಲ ಅದು ಒಂದು ತತ್ವ. ಧರ್ಮದ ರಕ್ಷಣೆಗಾಗಿ ವೀರಶೈವ ಧರ್ಮದ ಸಂವಿಧಾನದಂತೆ ಧರ್ಮಾದಿಕಾರಿಗಳಿಂದ ಧರ್ಮ ರಕ್ಷಣೆಯ ಧೀಕ್ಷೆ ಪಡೆದು ಧರ್ಮದ ಪ್ರಾಥಮಿಕ ಆಚರಣೆಯ ಸಂಸ್ಕಾರ ನೀಡಲು ಸಂಪೂರ್ಣವಾಗಿ ಸಮರ್ಪಿಸಿಕೊಂಡ ತ್ಯಾಗ ಜೀವಿ ವೀರ ವಿರಾಗಿ ಈ ಜಂಗಮರು. ಒಂದು ಅರ್ಥದಲ್ಲಿ ಪ್ರಾಥಮಿಕ ಶಿಕ್ಷಕನಿದ್ದ ಹಾಗೆ. ಒಬ್ಬ ವ್ಯೆಕ್ತಿಯ ಶೈಕ್ಷಣಿಕ ಸಾಧನೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನ ಪಾತ್ರ ಎಷ್ಟು ಮುಖ್ಯವೋ ಧಾರ್ಮಿಕ ಕ್ಷೇತ್ರದಲ್ಲಿ ಈ ಜಂಗಮನ ಪಾತ್ರವೂ ಅಷ್ಟೇ ಮುಖ್ಯವಾದದ್ದು. ಒಬ್ಬ ವ್ಯೆಕ್ತಿಯ ಜೀವನದಲ್ಲಿ ಶಿಕ್ಷಕನ ಪಾತ್ರದ ಮಹತ್ವ ನೆನಪಿಸಿಕೊಳ್ಳಲು, ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಜನ್ಮದಿನದ ಬದಲಿಗೆ ಶಿಕ್ಷಕರ ದಿನಾಚರಣೆಯನ್ನು ಆರಂಭಿಸಿ ಶಿಕ್ಷನಿಗೆ ಗೌರವ ಸಲ್ಲುವಂತೆ ಮಾಡಿ ಶಿಕ್ಷಕನ ಮಹತ್ವ ಸಾರಿದರು. ಅದೇ ರೀತಿ ಭಕ್ತಿ ಭಂಡಾರಿ ಬಸವಣ್ಣನವರು ನಿತ್ಯ ಜಂಗಮ ಆರಾಧಕರಾಗಿ ತಮ್ಮನ್ನು ಅನುಸರಿಸುವವರಿಗೆ ಜಂಗಮ ಆರಾಧನೆ ಕಡ್ಡಾಯವಾಗಿಸಿದ್ದರು ಮಾತ್ರವಲ್ಲದೆ ತಮ್ಮ ಜೀವನದ ಉದ್ದಕ್ಕೂ ಜಂಗಮ ಆರಾಧನೆ ನಡೆಸಿಕೊಂಡು ಬಂದರು. ಜಂಗಮ ಆರಾಧನೆಯೇ ವೀರಶೈವ ಧರ್ಮದ ಜೀವಾಳ. ಜಂಗಮ ಆರಾಧನೆ ಇಲ್ಲವಾದರೆ ಧರ್ಮ ಉಳಿಯಲು ಸಾಧ್ಯೆವೇಯಿಲ್ಲ ಆದರೆ ಇಂದು ನಿತ್ಯ ಜಂಗಮ ತೃಪ್ತಿ  ಬದಲು ನಿತ್ಯ ಜಂಗಮ ನಿಂದೆಯಾಗುತ್ತಿದೆ ನಿತ್ಯತೃಪ್ತಿ ಮಾಡುತ್ತಿದ್ದ ಬಸವಣ್ಣನವರನ್ನು ಭಂಡವಾಳವಾಗಿಸಿ ಕೊಂಡ ಕೆಲವು ಬಸವ ತತ್ವ ವ್ಯಾಪಾರಿಗಳು ಜಂಗಮರನ್ನು ವಿರೋಧಿಸುತಿದ್ದಾರೆ. ಅಂಥಹ ಕೆಲವರಿಗೆ ನಾವು ಕೇಳುವುದು ಇಷ್ಟೇ ಮೊದಲು ನೀವು ಲಿಂಗಾಯತರು ಎಂಬುದನ್ನು ಮೊದಲು ಶಿದ್ಧ ಪಡಿಸಿ ಸ್ವತಂತ್ರ ಧರ್ಮದ ಹಕ್ಕು ಸ್ಥಾಪಿಸಲು ಮುಂದಾಗಿ .  ಬಸವಣ್ಣನವರ ವಚನ ಚನ್ನಾಗಿ ಪ್ರವಚನ ಮಾಡುವದಕ್ಕೆ ಬಂದಮಾತ್ರಕ್ಕೆ ಅಥವಾ ನಿಮ್ಮ ಮರುಳು ಮಾತಿಗೆ ಮರುಳಾಗಿ ಹಣದಾಸೆಗಾಗಿ ನಿಮ್ಮನ್ನು ಹಿಂಬಾಲಿಸುವವರನ್ನು ಕಟ್ಟಿಕೊಂಡು ಮಾಧ್ಯಮಗಳ ಮುಂದೆ ಮಾತಾಡಿದರೆ ಸಾಕಾ?  ಸಮಾಜ ಬಾಂಧವರೇ ದಯಮಾಡಿ ಗಮನಿಸಿ ನಮ್ಮ ಮನೆಯೊಳಗೇ ಆಸ್ತಿಯಲ್ಲಿ ಪಾಲು ಬೇಡಲು ನಮಗೆ ಯಾವುದಾದರು ಹಕ್ಕು ಇರಬೇಕಲ್ಲವೇ ? ಯಾವುದಾದರು ಸಂಬಂದ ಹೊದಿಲ್ಲದವರಿಗೆ ಪಾಲು ಕೊಡಲು ಸಾಧ್ಯವೇ ? ದುಡ್ಡು ಇದೆಯಂದು ಎಲ್ಲಿ ಬೇಕಲ್ಲಿ ಹೊಲ ಖರಿದಿ ಮಾಡ ಬೇಕಾದರೆ ಆವ್ಯೆಕ್ತಿ ಹೆಸರಲ್ಲಿ ಎಲ್ಲಿಯಾದರೂ ಭೂಮಿ ಇರಲೇ ಬೇಕು ಅವನ ವಂಶಸ್ಥರಾದು ಕೃಷಿಕರಾಗಿರಬೇಕು ಎಂಬ ಕಾನೂನು ಇದೆ ಇಲ್ಲದಿದ್ದರೆ ಎಷ್ಟೇ ದುಡ್ಡುಕೊಟ್ಟರು ಭೂಮಿ ಹಕ್ಕುದಾರನಾಗುವುದಿಲ್ಲ ಹಾಗೆಯೇ ನಮ್ಮಲ್ಲಿ ಗುರು ವಿರಕ್ತರು ಎಂಬ ದಾಯದಿಗಲಿದ್ದೇವೆ ಇಲ್ಲಿ ಹಕ್ಕು ಮಂಡನೆ ಆಸ್ತಿ ಪಾಲು ಇವರಲ್ಲೇ ಯಾಗಬೇಕು ಮಾತೆ ಮಾದೇವಿ ಮತ್ತು ಅವರ ಹಿಂಬಾಲಕರಿಗೆ ಲಿಂಗಾಯತ ಸ್ವತಂತ್ರ ಹಕ್ಕು ಮಂಡನೆಗೆ ಅಧಿಕಾರವೇ ಇಲ್ಲ.  ಮಾತೆ ಮಾದೇವಿ ಮತ್ತವರ ಹಿಬಾಲಕರು ಲಿಂಗಾಯತರೇ ಅಲ್ಲ ಅದಕ್ಕಾಗಿ ಮಾದ್ಯಮಗಳು ಅವರ ಪುಡಿಕಾಸಿಗಾಗಿ ಪ್ರಚಾರ ಕೊಡಬಾರದು . ವಿರಕ್ತರಲ್ಲೇ ಕೆಲವು ಪ್ರಗತಿಪರ ಸ್ವಾಮೀಜಿಗಳು ಬೇಕಾದರೆ ಸ್ವತಂತ್ರ ಧರ್ಮದ ಹಕ್ಕು ಮಂಡಿಸಲಿ. ಈ ವಿರಕ್ತ ಮಠದ ಪೂಜ್ಯರಿಂದ ದೀಕ್ಷೆ ಪಡೆದು ಆಸ್ವತಂತ್ರ ಸ್ವೀಕರಿಸಲಿ ಆಮೇಲೆ ಬೇಕಾದರೆ ಹಕ್ಕು ,ಮಂಡನೆ ಮಾಡಲಿ. ಮಾತೆ ಮಾದೆವಿಯವರಿಗೆ ನಾವು ಕೇಳುವುದೆಂದರೆ ನೀವು ಯಾರು ನಿಮ್ಮ ಸ್ವತಂತ್ರ ಧರ್ಮದಲ್ಲಿ ನಿಮ್ಮ ಸ್ಥಾನೆವೇನು ಬಸವಣ್ಣ ನವರು ನಿಮ್ಮಂತೆ ಯಾವದೇ ಸಂಧರ್ಭದಲ್ಲಿ ತಮ್ಮನ್ನು ತಾವು ಗುರು ಜಗದ್ಗುರು ಎಂದು ಕೊಂಡಿರಲಿಲ್ಲ ಎನ್ನುವದು ನಿಮಗೆ ತಿಳಿದಿಲ್ಲವೇ ಅಲ್ಲಮ ಪ್ರಭುವನ್ನು ಜಗದ್ಗುರುವಾಗಿ ಮಾಡಿರಲಿಲ್ಲವೇ ಹಾಗೆ ನೀವು ಯಾರಿಗಾದರು ಜಗದ್ಗುರುವಾಗಿ ಯಾಕೆ ಮಾಡಲಿಲ್ಲ ? ಈಗ ನಿಮ್ಮ ಪ್ರವಚನದ ಚಾರ್ಮ ಕಡಿಮೆಯಾಗಿದೆ ನಿಮಗಿಂತ ಚನ್ನಾಗಿ ಯಾಮರಿಸುವ ಕಲೆ ಬಲ್ಲವರು ಬಹಳ ಜನರು ಈಗ ಹೆಚ್ಚಾಗಿದ್ದರೆ ಅದಕ್ಕಾಗಿ ನೀವು ನಿಮ್ಮ ಇರುವಿಕೆ ಸಾಬೀತು ಪಡಿಸಿಕೊಳ್ಳಲು ಈ ನಾಟಕ ಸುರು ಹಚ್ಚಿಕೊಂಡಿದ್ದಿರಿ ಅಂತ ನಿಮ್ಮವರೇ ಆಡಿ ಕೊಳ್ಳುತ್ತಿದ್ದರಲ್ಲ ಅವರಿಗೆ ನಿಮ್ಮ ಉತ್ತರವೇನು ?

ಗುರುವಾರ, ನವೆಂಬರ್ 7, 2013

ಅಪೇಕ್ಷಾ ಪತ್ರ

ಅಖಿಲ ಭಾರತ 
ವೀರಶೈವ ಜಂಗಮ ಸಮಾಜ ಮಹಾಸಭಾ
======================================================================
ಕೇಂದ್ರ ಕಚೇರಿ H.NO.13, ನಾರಾಯಣಪ್ಪ ಕಂಪೌಂಡ ಕೊಡಿಗೆ ಹಳ್ಳಿ ತಿಡ್ಲು ಮೆನ್ ರೋಡ ಸಹಕಾರಿ ನಗರ ಬೆಂಗಳೂರು-92 ಆಡಳಿತ ಕಚೇರಿ 'ಶ್ರೀ ಕೆರಿ ಬಸವ ನಿಲಯ'ಪಂಚಾಕ್ಷರಿ ನಗರ ೪ನೆಯ ಅಡ್ಡರಸ್ತೆ ಗದಗ -1. ದೂರವಾಣಿ:08372-220432.
======================================================================

*ಸದಸ್ಯತ್ವ ಅಪೇಕ್ಷಾ ಪತ್ರ ***
---------------------------------------------------------------------- 
ಪೂರ್ಣ ಹೆಸರು :
------------------------------------------------------------------------------------------------------------
ತಂದೆಯ ಹೆಸರು : 
------------------------------------------------------------------------------------------------------------
ತಾಯಿಯ ಹೆಸರು :
------------------------------------------------------------------------------------------------------------
ಅಡ್ಡ ಹೆಸರು :
------------------------------------------------------------------------------------------------------------
ಜನ್ಮ ಸ್ಥಳ : 
------------------------------------------------------------------------------------------------------------
ಜನ್ಮ ದಿನಾಂಕ :
------------------------------------------------------------------------------------------------------------
ಉದ್ಯೋಗ : 
------------------------------------------------------------------------------------------------------------
ಮೊಬೈಲ್ ನಂ : 
------------------------------------------------------------------------------------------------------------
e-mail : 
----------------------------------------------------------------------------------------------------------------------------------
ಅಂಚೆ ವಿಳಾಸ :




------------------------------------------------------------------------------------------------------------
ಸ್ಥಳ        : 
ದಿನಾಂಕ  :                                                                                                ಅರ್ಜಿದಾರರ ಸಹಿ/-
=====================================================================
ಸದಸ್ಯತ್ವ ಶುಲ್ಕವಿವರ :  ಸಾಮಾನ್ಯ: 250/- ರೂಗಳು. ಆಜೀವ: 500/- ರೂಗಳು. ದಾನಿಗಳು: 1000/- ರೂಗಳು.  ಪೋಷಕರು: 2500/- ರೂಗಳು. ಮಹಾಪೋಷಕರು: 5000/- ರೂಗಳು. + ಪ್ರವೇಶ ಶುಲ್ಕ 25/-ರೂಗಳು
----------------------------------------------------------------------------------------------------------
ಶುಲ್ಕ ಸಂದಾಯ ಮಾಡಬೇಕಾದ ವಿಳಾಸ : Channaveerayya K. Hiremath AXIS BANK GADAG
A/C NO.413010100002738 IFS Code UTIB0000413.ಶುಲ್ಕವನ್ನು M.O.ಅಥವಾ D.D. ಮೂಲಕವೂ ಸಂದಾಯ ಮಾಡಬಹುದು

ಗುರುವಾರ, ಅಕ್ಟೋಬರ್ 31, 2013

ಈ ವೀರಶೈವ ಧರ್ಮ ಒಡೆಯಲು ಬಿಡುವುದಿಲ್ಲ.

ಆತ್ಮೀಯರೇ ..... 
ಜಂಗಮ ಸಮುದಾಯ ಜಾತಿಯೂ ಅಲ್ಲ ಒಳ ಪಂಗಡವೂ ಅಲ್ಲ ಈ ಜಂಗಮರು ವೀರಶೈವ ಧರ್ಮದ ಪ್ರಥಮ ಪ್ರಜೆಗಳು. ಜಂಗಮನಿಲ್ಲದ ವೀರಶೈವ ಧರ್ಮ ನೆನಸಿಕೊಳ್ಳಲು ಸಾಧ್ಯವೇ ಇಲ್ಲ.ಧರ್ಮದ ಪದ್ಧತಿಯಂತೆ ಜಂಗಮ ದೀಕ್ಷೆಯಾಗಿ ಭಕ್ತ ವರ್ಗಕ್ಕೆ ಲಿಂಗ ಧಾರಣೆ ಮಾಡಲು  ವೀರಶೈವ ಧರ್ಮದ ಜಗದ್ಗುರುಗಳವರಿಂದ ಧರ್ಮದ  ಸಂವಿಧಾನ ಬದ್ಧ ಅಧಿಕಾರವನ್ನು ಪಡೆದುಕೊಂಡು ಧರ್ಮದ ಆಚರಣೆಗಳನ್ನು ಉಳಿಸಿಕೊಂಡು ಬಂದ ಧಮಾಧಿಕಾರಿ ಈ ಜಂಗಮ. ಕರ್ನಾಟಕದಲ್ಲಿ  ಬಹುಸಂಖ್ಯಾತರು ಭಾರತದಲ್ಲಿ ಅಲ್ಪ ಸಂಖ್ಯಾತರಾಗಿರುವ ಈ ವೀರಶೈವ ರೆಲ್ಲರಿಗೂ ಹುಟ್ಟಿದ ದಿನವೇ ಅವರ ಮನೆಗೆ ಹೋಗಿ ಲಿಂಗ ದಾರಣೆ ಮಾಡಿ ಲಿಂಗವಂತನನ್ನಾಗಿ ಮಾಡಿ ವೀರಶೈವ ದರ್ಮವನ್ನು ರಕ್ಷಿಸಿಕೊಂಡು ಬಂದ ಧರ್ಮ ರಕ್ಷಕ ಈ ಜಂಗಮ ನೇ ಹೊರತು ಬೇರೆ ಯಾರು ಅಲ್ಲ ನಾವು ಲಿಂಗಾಯತರು ನಾವು ವೀರಶೈವರು ಎಂದು ಹೊಡೆದಾಡುತ್ತಿರುವ ಅಥವಾ ಪ್ರತ್ಯೇಕ ಅಸ್ತಿತ್ವಕ್ಕಾಗಿ ಪರಿತಪಿಸುತ್ತಿರುವವರು ಈ ಜಂಗಮರನ್ನು ಸ್ಮರಿಸಿಕೊಳ್ಳಲೇಬೆಕು ಯಾಕಂದರೆ ಇವರೆಲ್ಲರಿಗೂ ಲಿಂಗ ಕಟ್ಟಿದವರೇ ನಾವು. ತಮ್ಮ ತಮ್ಮ ಹಿಂಬಾಲಕರಿಗೆ ಲಿಂಗ ಧಾರಣೆ ಮಾಡದ ಇವರು ಅವರ ನಾಯಕರಾದರು ಹೇಗಾಗಲು ಸಹಾಧ್ಯ. ಪ್ರತ್ಯೇಕವಾದಿಗಳು ನೆನಪಿಟ್ಟು ಕೊಳ್ಳಲಿ ನಿಮ್ಮ ಹಿಂಬಾಲಕರಂದು ನಿಮ್ಮ ಮಾತಿಗೆ ಮರುಳಾಗಿ ನಿಮ್ಮ ಹಿಂದೆ ಬಂದಿದ್ದಾರಲ್ಲ ಅವರೆಲ್ಲರಿಗೂ ಲಿಂಗ ಕಟ್ಟಿದವರು ನಾವು.ಹಾಗೆ ವಿಚಾರ ಮಾಡಿದರೆ ನಿಮಗೂ ಕೂಡಾ ಲಿಂಗ ಕಟ್ಟಿದವರು ನಾವೇ.. .ಸರಿಯಾದ  ತಿಳುವಳಿಕೆ ನೀಡದ ಕಾರಣ ನಿಮ್ಮನ್ನು ಹಿಂಬಾಲಿಸುತಿದ್ದರೆ ನಮಗೂ ತಲೆ ಕೆಟ್ಟಿದೆ ನಾವು ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಮನೆ ಮನೆಗೆ ಹೋಗುತ್ತೇವೆ ತಿಳುವಳಿಕೆ ನೀಡುತ್ತೆವೆ ಜನ ಜಾಗೃತಿ ಮೂಡಿಸುತ್ತೆವೆ ಈ ವೀರಶೈವ ಧರ್ಮ ಒಡೆಯಲು ಬಿಡುವುದಿಲ್ಲ. ನಿಮ್ಮದೆನಿದ್ದರು ಮಾದ್ಯಮಗಳ ಮುಂದೆ ಮಾತ್ರ ಹಳ್ಳಿಗೆ ಬಂದರೆ ನಿಮಗೆ ಸರಿಯಾಗಿ ಬುದ್ದಿ ಹೇಳುತ್ತೇವೆ ಇದು ನಿಮಗೆ ಗೊತ್ತಿದ್ದೇ ನೀವು ಹಳ್ಳಿಗಳಿಗೆ ಕಾಲು ಇಟ್ಟಿಲ್ಲ ಇಡುವುದು ಇಲ್ಲ ಇಡಲು ನಾವು ಬಿಡುವುದು ಇಲ್ಲ.ನೀವೆಲ್ಲ ನಮ್ಮ ಮುಂದಿನ ಕೂಸುಗಳು ನಾವು ಸಾವಿರ ಸಾವಿರ ವರ್ಷ ಗಳಿಂದಲೂ ಬಂದವರು ನಮಗೆ ನೀವು ತೃಣ ಸಮಾನರು. ಸಮಸ್ತ ವೀರಶೈವ ಸಮಾಜ ಬಾಂಧವರೆ ಗುರು ವಿರಕ್ತರು ನಮ್ಮ ಧರ್ಮದ ಎರಡು ಕಣ್ಣುಗಳು ಅವುಗಳನ್ನು ಚನ್ನಾಗಿ ನೋಡಿಕೊಳ್ಳುವುದು ನಮ್ಮ ಧರ್ಮ ಈ ಗುರು ವಿರಕ್ತರ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಅವರೇ ಬಗೆ ಹರಿಸಿ ಕೊಳ್ಳುತ್ತಾರೆ ಅವರಿಗೆ ಬಿಟ್ಟು ಬಿಡಿ ಬಗೆ ಹರಿಸಲು ತಿಳಿ ಹೇಳಿ ಬೀದಿಗಿಳಿದು ಹೋರಾಡಲು ಬಿಡಬೇಡಿ. ಗುರು ವಿರಕ್ತ ಪರಂಪರೆ ಹೊರತು ಪಡಿಸಿ ಇನ್ನೊಂದು ಯಾವದೇ ಪಂಗಡ ಹುಟ್ಟುಹಾಕಬೇಡಿ ಆಸೆ ಆಮಿಷಕ್ಕೆ ಬಲಿಯಾಗಿ ಕೊಲೆ ಬಸವರಾಗಬೇಡಿ ಬಸವಣ್ಣ ಬರಿ ನಮ್ಮ ಆಸ್ತಿ ಎಂದು ಕೆಲವೇ ಕೆಲವರು ಬಸವಣ್ಣ ನವರನ್ನು ಬಂಡವಾಳವಗಿಸಿಕೊಳ್ಳಲು ಬಿಡಬೇಡಿ ಮುಂದಿನ ನಮ್ಮ ಪೀಳಿಗೆ ನಮ್ಮನ್ನು ಶಪಿಸುವಂತಾಗದಂತೆ ಎಚ್ಚರಿಕೆವಹಿಸಿ ಇದು ನಮ್ಮ ವಿನಂತಿ ಅಲ್ಲ ಆಜ್ಞೆ.ವೀರಶೈವನಮ್ಮ ಹೊಣೆ.

ಭಾನುವಾರ, ಅಕ್ಟೋಬರ್ 27, 2013

ಸನಾತನ ಧರ್ಮಗಳಲ್ಲಿ ವೀರಶೈವ ಧರ್ಮವು ಒಂದು

ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಶಿವನ ಆದೇಶದ ಮೇರೆಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಈ ಧರ್ಮವನ್ನು ಪ್ರತಿಶ್ಃಟಾಪಿಸಿದ್ದಾರೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಈ ಧರ್ಮದ ಪಂಚಪೀಠಗಳು ರಂಭಾಪುರೀ(ಕನರ್ಾಟಕ), ಉಜ್ಜಯಿನಿ(ಮಧ್ಯ ಪ್ರದೇಶ ಮತ್ತು ಕನರ್ಾಟಕ), ಕೇದಾರ(ಉತ್ತರಾಂಚಲ), ಶ್ರೀಶೈಲ(ಆಂದ್ರ ಪ್ರದೇಶ) ಮತ್ತು ಕಾಶೀ(ಉತ್ತರ ಪ್ರದೇಶ) ಕ್ಷೇತ್ರಗಳಲ್ಲಿ ಸನಾತನ ಕಾಲದಿಂದಲೂ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಇವು ಈ ವೀರಶೈವಧರ್ಮದ ರಾಷ್ಟ್ರೀಯ ಮಹಪೀಠಗಳಾಗಿವೆ.
ರಂಭಾಪುರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಷರ್ಿಗೆ ಪಡಿವಿಡಿ ಸೂತ್ರವನ್ನು, ಉಜ್ಜಿಯಿನಿಪೀಠದ ಶ್ರೀ ಜಗದ್ಗುರು ದಾರುಕಾಚಾರ್ಯರು ದದೀಚಿ ಮಹಷರ್ಿಗೆ ವೃಷ್ಟಿ ಸೂತ್ರವನ್ನು, ಕೇದಾರಪೀಠದ ಶ್ರೀ ಜಗದ್ಗುರು ಘಂಟಾಕಣರ್ಾಚಾರ್ಯರು ವ್ಯಾಸ ಮಹಷರ್ಿಗೆ, ಶ್ರೀಶೈಲಪೀಠದ ಶ್ರೀ ಜಗದ್ಗುರು ಧೇನುಕಣರ್ಾಚಾರ್ಯರು ಸಾನಂದಮಹಷರ್ಿಗೆ ಮುಕ್ತಾಗುಚ್ಚ ಸೂತ್ರವನ್ನು ಮತ್ತು ಕಾಶೀ ಪೀಠದ ಶ್ರೀ ಜಗದ್ಗುರು ವಿಶ್ವಕಣರ್ಾಚಾರ್ಯರು ದೂವರ್ಾಸ ಮಹಷರ್ಿಗೆ ಪಂಚವರ್ಣ ಸೂತ್ರವನ್ನು ಉಪದೇಶ ಮಾಡಿದ್ದಾರೆ. ಈ ಪಂಚಸೂತ್ರಗಳೇ ವೀರಶೈವಧರ್ಮದ ತತ್ತ್ವಸಿದ್ಧಾಂತವನ್ನು ಪ್ರತಿಪಾದಿಸುವ ಆದಿಸೂತ್ರಗಳಾಗಿವೆ.
ವೀರಶೈವಧರ್ಮದ ತತ್ತ್ವಸಿದ್ಧಾಂತವು ಶಿವಾದ್ವೈತ, ವಿಶೇಷಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಸಿದ್ಧಾಂತದ ಮೂಲ ಬೇರುಗಳು ವೇದ, ಉಪನಿಷತ್ ಮತ್ತು ಕಾಮಿಕಾದಿ ವಾತುಲಾಂತಗಳಾದ 28 ಶಿವಾಗಮಗಳಲ್ಲಿ ಕಂಡು ಬರುತ್ತವೆ. ಈ ವೇದಾಗಮಗಳನ್ನು ಆಮೂಲಾಗ್ರವಾಗಿ ಅಧ್ಯೌ=ಯನ ಮಾಡಿದ ಶಿವಯೋಗಿಗಳಲ್ಲಿ ಚಕ್ರವತರ್ಿಯೆಂದು ಕರೆಯಿಸಿಕೊಳ್ಳಲ್ಪಟ್ಟ ಶ್ರೀ ಶಿವಯೋಗಿ ಶಿವಾಚಾರ್ಯರು ಮೇಲಿನ ವೇದಾಗಮಗಳಲ್ಲಿ ಅಡಗಿರುವ ವೀರಶೈವ ಸಿದ್ಧಾಂತವನ್ನು ರೇಣುಕಾಗಸ್ತ್ಯ ಸಂವಾದರೂಪದಲ್ಲಿ ಬರೆದಿಟ್ಟಿದ್ದಾರೆ. ಅದುವೇ ಶ್ರೀ ಸಿದ್ಧಾಂತಶಿಖಾಮಣಿ.  ಈ ಗ್ರಂಥದಲ್ಲಿ ವೀರಶೈವಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತವನ್ನು ನೂರೊಂದು ಸ್ಥಲಗಳ ರೂಪದಲ್ಲಿ ವಿಸ್ತಾರಗೊಳಿಸಿದ ಪ್ರಥಮ ಗ್ರಂಥವೇ ಶ್ರೀ ಸಿದ್ಧಾಂತಶಿಖಾಮಣಿ.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪ್ರಸಾದ ವಾಣಿಯಿಂದ ಇದು ಹೊರಹೊಮ್ಮಿದ ಕಾರಣ ಇದೊಂದು ಪ್ರಾಸಾದಿಕಗ್ರಂಥವು. ಈ ಗ್ರಂಥವನ್ನು ಪ್ರತಿನಿತ್ಯ ಯಾರು ಪಾರಯಣ ಮತ್ತು ಸ್ವಾಧ್ಯಾಯವನ್ನು ಮಾಡುವರೋ ಅವರು ಇಹಲೋಕದ ಸಕಲ ಭೋಗ ಭಾಗ್ಯಗಳನ್ನು ಪಡೆದು ಕೊನೆಗೆ ಲಿಂಗಾಂಗ ಸಾಮರಸ್ಯರೂಪವಾದ ಮುಕ್ತಿಯನ್ನು ಪಡೆದುಕೊಳ್ಳುವರು. ಈ ಭೋಗ ಮೋಕ್ಷಗಳು ಜಗತ್ತಿನ ಸರ್ವಮಾನವರಿಗೆ ದೊರೆಯಲೆಂಬ ಉದ್ದೇಶದಿಂದ ಈ ಗ್ರಂಥವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ. ಸಂಸ್ಕೃತ ಮೂಲದ ಈ ಗ್ರಂಥವನ್ನು ಕನ್ನಡ,(ಅನುವಾದ-ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಂಪಾದನೆ-ಡಾ.ಎಸ್. ಆರ್. ಸಿದ್ಧಲಿಂಗಪ್ಪ, ಬೆಂಗಳೂರು) ಮರಾಠಿ,(ಪದ್ಯಾನುವಾದ ಮತ್ತು ಸಂಪಾದನೆ-ಡಾ. ಎಸ್.ಡಿ. ಪಸಾರಕರ್, ಸೋಲಾಪುರ) ತೆಲಗು,(ಅನುವಾದ ಮತ್ತು ಸಂಪಾದನೆ-ಡಾ. ಕೆ. ಪ್ರತಾಪ್, ತಿರುಪತಿ) ತಮಿಳು, (ಅನುವಾದ ಮತ್ತು ಸಂಪಾದನೆ-ಡಾ. ಗಣೇಶನ್,ಪಾಂಡಿಚರಿ) ಮಲಯಾಳಂ, (ಅನುವಾದ-ಶ್ರೀಮತಿ ಅಂಬಿಕಾ ಅಪ್ಪುಕುಟ್ಟನ್, ತಿರುವಾಂಕುಲಮ್ ಮತ್ತು ಸಂಪಾದನೆ-ಡಾ. ನಟೇಶನ್, ಕಾಲಡಿ) ಹಿಂದಿ,(ಅನುವಾದ ಮತ್ತು ಸಂಪಾದನೆ-ಡಾ. ಚತುವರ್ೇದಿ, ವಾರಣಸಿ) ಇಂಗ್ಲೀಷ(ಅನುವಾದ ಮತ್ತು ಸಂಪಾದನೆ-ಡಾ. ಎಂ. ಶಿವಕುಮಾರಸ್ವಾಮಿ) ಮತ್ತು ರಸ್ಸಿಯನ್(ಅನುವಾದ ಮತ್ತು ಸಂಪಾದನೆ-ಕುಮಾರಿ ಯುಲಿಯಾ(ಗೌರಿ), ಕೀವ್, ಯುಕ್ರೈನ್) ಮುಂತಾದ ಭಾಷೆಗಳಿಗೆ ಅನುವಾದಿಸಾಗಿದ್ದು ಇವೆಲ್ಲವುಗಳು ಇಲ್ಲಿ ಉಪಲಬ್ದವಿವೆ.
ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಶಿವನ ಆದೇಶದ ಮೇರೆಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಈ ಧರ್ಮವನ್ನು ಪ್ರತಿಶ್ಃಟಾಪಿಸಿದ್ದಾರೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಈ ಧರ್ಮದ ಪಂಚಪೀಠಗಳು ರಂಭಾಪುರೀ(ಕನರ್ಾಟಕ), ಉಜ್ಜಯಿನಿ(ಮಧ್ಯ ಪ್ರದೇಶ ಮತ್ತು ಕನರ್ಾಟಕ), ಕೇದಾರ(ಉತ್ತರಾಂಚಲ), ಶ್ರೀಶೈಲ(ಆಂದ್ರ ಪ್ರದೇಶ) ಮತ್ತು ಕಾಶೀ(ಉತ್ತರ ಪ್ರದೇಶ) ಕ್ಷೇತ್ರಗಳಲ್ಲಿ ಸನಾತನ ಕಾಲದಿಂದಲೂ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಇವು ಈ ವೀರಶೈವಧರ್ಮದ ರಾಷ್ಟ್ರೀಯ ಮಹಪೀಠಗಳಾಗಿವೆ.
ರಂಭಾಪುರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಷರ್ಿಗೆ ಪಡಿವಿಡಿ ಸೂತ್ರವನ್ನು, ಉಜ್ಜಿಯಿನಿಪೀಠದ ಶ್ರೀ ಜಗದ್ಗುರು ದಾರುಕಾಚಾರ್ಯರು ದದೀಚಿ ಮಹಷರ್ಿಗೆ ವೃಷ್ಟಿ ಸೂತ್ರವನ್ನು, ಕೇದಾರಪೀಠದ ಶ್ರೀ ಜಗದ್ಗುರು ಘಂಟಾಕಣರ್ಾಚಾರ್ಯರು ವ್ಯಾಸ ಮಹಷರ್ಿಗೆ, ಶ್ರೀಶೈಲಪೀಠದ ಶ್ರೀ ಜಗದ್ಗುರು ಧೇನುಕಣರ್ಾಚಾರ್ಯರು ಸಾನಂದಮಹಷರ್ಿಗೆ ಮುಕ್ತಾಗುಚ್ಚ ಸೂತ್ರವನ್ನು ಮತ್ತು ಕಾಶೀ ಪೀಠದ ಶ್ರೀ ಜಗದ್ಗುರು ವಿಶ್ವಕಣರ್ಾಚಾರ್ಯರು ದೂವರ್ಾಸ ಮಹಷರ್ಿಗೆ ಪಂಚವರ್ಣ ಸೂತ್ರವನ್ನು ಉಪದೇಶ ಮಾಡಿದ್ದಾರೆ. ಈ ಪಂಚಸೂತ್ರಗಳೇ ವೀರಶೈವಧರ್ಮದ ತತ್ತ್ವಸಿದ್ಧಾಂತವನ್ನು ಪ್ರತಿಪಾದಿಸುವ ಆದಿಸೂತ್ರಗಳಾಗಿವೆ.
ವೀರಶೈವಧರ್ಮದ ತತ್ತ್ವಸಿದ್ಧಾಂತವು ಶಿವಾದ್ವೈತ, ವಿಶೇಷಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಸಿದ್ಧಾಂತದ ಮೂಲ ಬೇರುಗಳು ವೇದ, ಉಪನಿಷತ್ ಮತ್ತು ಕಾಮಿಕಾದಿ ವಾತುಲಾಂತಗಳಾದ 28 ಶಿವಾಗಮಗಳಲ್ಲಿ ಕಂಡು ಬರುತ್ತವೆ. ಈ ವೇದಾಗಮಗಳನ್ನು ಆಮೂಲಾಗ್ರವಾಗಿ ಅಧ್ಯೌ=ಯನ ಮಾಡಿದ ಶಿವಯೋಗಿಗಳಲ್ಲಿ ಚಕ್ರವತರ್ಿಯೆಂದು ಕರೆಯಿಸಿಕೊಳ್ಳಲ್ಪಟ್ಟ ಶ್ರೀ ಶಿವಯೋಗಿ ಶಿವಾಚಾರ್ಯರು ಮೇಲಿನ ವೇದಾಗಮಗಳಲ್ಲಿ ಅಡಗಿರುವ ವೀರಶೈವ ಸಿದ್ಧಾಂತವನ್ನು ರೇಣುಕಾಗಸ್ತ್ಯ ಸಂವಾದರೂಪದಲ್ಲಿ ಬರೆದಿಟ್ಟಿದ್ದಾರೆ. ಅದುವೇ ಶ್ರೀ ಸಿದ್ಧಾಂತಶಿಖಾಮಣಿ.  ಈ ಗ್ರಂಥದಲ್ಲಿ ವೀರಶೈವಧರ್ಮದ ಪ್ರಮುಖ ತತ್ತ್ವಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಸಿದ್ಧಾಂತವನ್ನು ನೂರೊಂದು ಸ್ಥಲಗಳ ರೂಪದಲ್ಲಿ ವಿಸ್ತಾರಗೊಳಿಸಿದ ಪ್ರಥಮ ಗ್ರಂಥವೇ ಶ್ರೀ ಸಿದ್ಧಾಂತಶಿಖಾಮಣಿ.
ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಪ್ರಸಾದ ವಾಣಿಯಿಂದ ಇದು ಹೊರಹೊಮ್ಮಿದ ಕಾರಣ ಇದೊಂದು ಪ್ರಾಸಾದಿಕಗ್ರಂಥವು. ಈ ಗ್ರಂಥವನ್ನು ಪ್ರತಿನಿತ್ಯ ಯಾರು ಪಾರಯಣ ಮತ್ತು ಸ್ವಾಧ್ಯಾಯವನ್ನು ಮಾಡುವರೋ ಅವರು ಇಹಲೋಕದ ಸಕಲ ಭೋಗ ಭಾಗ್ಯಗಳನ್ನು ಪಡೆದು ಕೊನೆಗೆ ಲಿಂಗಾಂಗ ಸಾಮರಸ್ಯರೂಪವಾದ ಮುಕ್ತಿಯನ್ನು ಪಡೆದುಕೊಳ್ಳುವರು. ಈ ಭೋಗ ಮೋಕ್ಷಗಳು ಜಗತ್ತಿನ ಸರ್ವಮಾನವರಿಗೆ ದೊರೆಯಲೆಂಬ ಉದ್ದೇಶದಿಂದ ಈ ಗ್ರಂಥವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ. ಸಂಸ್ಕೃತ ಮೂಲದ ಈ ಗ್ರಂಥವನ್ನು ಕನ್ನಡ,(ಅನುವಾದ-ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಂಪಾದನೆ-ಡಾ.ಎಸ್. ಆರ್. ಸಿದ್ಧಲಿಂಗಪ್ಪ, ಬೆಂಗಳೂರು) ಮರಾಠಿ,(ಪದ್ಯಾನುವಾದ ಮತ್ತು ಸಂಪಾದನೆ-ಡಾ. ಎಸ್.ಡಿ. ಪಸಾರಕರ್, ಸೋಲಾಪುರ) ತೆಲಗು,(ಅನುವಾದ ಮತ್ತು ಸಂಪಾದನೆ-ಡಾ. ಕೆ. ಪ್ರತಾಪ್, ತಿರುಪತಿ) ತಮಿಳು, (ಅನುವಾದ ಮತ್ತು ಸಂಪಾದನೆ-ಡಾ. ಗಣೇಶನ್,ಪಾಂಡಿಚರಿ) ಮಲಯಾಳಂ, (ಅನುವಾದ-ಶ್ರೀಮತಿ ಅಂಬಿಕಾ ಅಪ್ಪುಕುಟ್ಟನ್, ತಿರುವಾಂಕುಲಮ್ ಮತ್ತು ಸಂಪಾದನೆ-ಡಾ. ನಟೇಶನ್, ಕಾಲಡಿ) ಹಿಂದಿ,(ಅನುವಾದ ಮತ್ತು ಸಂಪಾದನೆ-ಡಾ. ಚತುವರ್ೇದಿ, ವಾರಣಸಿ) ಇಂಗ್ಲೀಷ(ಅನುವಾದ ಮತ್ತು ಸಂಪಾದನೆ-ಡಾ. ಎಂ. ಶಿವಕುಮಾರಸ್ವಾಮಿ) ಮತ್ತು ರಸ್ಸಿಯನ್(ಅನುವಾದ ಮತ್ತು ಸಂಪಾದನೆ-ಕುಮಾರಿ ಯುಲಿಯಾ(ಗೌರಿ), ಕೀವ್, ಯುಕ್ರೈನ್) ಮುಂತಾದ ಭಾಷೆಗಳಿಗೆ ಅನುವಾದಿಸಾಗಿದ್ದು ಇವೆಲ್ಲವುಗಳು ಇಲ್ಲಿ ಉಪಲಬ್ದವಿವೆ.

ಶುಕ್ರವಾರ, ಅಕ್ಟೋಬರ್ 25, 2013

ಜಂಗಮರ ಬಗ್ಗೆ ಎಚ್ಚರಿಕೆ ಇಂದ ಮಾತಾಡಲಿ

ಆತ್ಮೀಯರೇ
ಇಂದು ನಮ್ಮ ಸಮಾಜವು ಕವಲು ದಾರಿಯಲ್ಲಿ ಇದೆ.ಸಮಾಜದ ಉಧ್ಧಾರಕ್ಕಗಿ,ಭಕ್ತರ ಉದ್ಧಾರಕ್ಕಾಗಿ ತಲೆ ತಲಾಂತರದಿಂದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿ ಬಡವರಾಗಿಯೇ ಉಳಿದಿದ್ದೇವೆ. ಇಂದು ಏನಾದರು ವೀರಶೈವ ಧರ್ಮ ಉಳಿದುಕೊಂಡು ಬಂದಿದ್ದೆಯಾದರೆ ಅದು ನಮ್ಮ ಸಮಾಜದ ಪೂರ್ವಜರಿಂದ ಮಾತ್ರ ಎಂಬುವದು ಸೂರ್ಯನಷ್ಟೇ ಸತ್ಯ.ಬಸವಾದಿ ಪ್ರಮಥರ ವಚನಗಳು ರಕ್ಷಿಸಿಕೊಂಡು ಬಂದವರಲ್ಲಿ ಈ ಹಳ್ಳಿಯ ಹೈದ ಜಂಗಮರೆ ಹೊರತು ಅನಾಧಿಕಾರಿ ಲಿಂಗಾಯತಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಈ ಜಂಗಮ ನಿಂದೆ ಹೆಚ್ಚಾಗಿದೆ. ನಾವು ಜಂಗಮರೆ ಅಲ್ಲವಂತೆ.ಹಾಗಾದರೆ ನಾವು ಯಾರು ? ಜಂಗಮರು ಯಾರು ಬೇಕಾದವರು ಆಗಲು ಬರುತ್ತದೆ ಎಂದು ಸ್ವಯಂ ಘೋಷಿತ ಬುದ್ದಿಜೀವಿಗಳ ಮೊಂಡ ವಾದವಾಗಿದೆ. ಆದರೆ ಅವರು ಇದೆ ಸಂಧರ್ಭದಲ್ಲಿ ಲಿಂಗ ಆಯತ ಮಾಡಿಕೊಂಡವರು ಮಾತ್ರ ಲಿಂಗಾಯತ ಎಂದು ಹೇಳುವದನ್ನು ಮರೆಯುತ್ತಾರೆ. ನಮ್ಮ ಜಂಗಮರು ಹುಟ್ಟಿನಿಂದ ಎಂದು ಜಂಗಮರೆಂದು ಹೇಳಿಕೊಂಡಿಲ್ಲ ನಾವು ಹುಟ್ಟಿ ಎಂಟು ವರ್ಷಗಳವರೆಗೆ ಲಿಂಗಾಯತರಾಗಿ ಮಾತ್ರ ಇದ್ದು, ಎಂಟು ವರ್ಷ ಮುಗಿದನಂತರ ವೀರಶೈವ ಪರಂಪರೆಯ ಉಪಾಚಾರ್ಯರಿಂದ ಕ್ರಮಬದ್ದವಾಗಿ ಅಯ್ಯಾಚಾರ ಮಾಡಿಕೊಂಡು ಜಂಗಮರಾಗಿ ಉಳಿದು ಕೊಂಡು ಬಂದಿದ್ದೇವೆ. ಅಯ್ಯಾಚಾರ ಆಗುವವವರೆಗೆ ಅಯ್ಯನವರು ಆಗಿರುವುದಿಲ್ಲ. ಇವತ್ತಿಗೂ ಈ ಸಂಸ್ಕಾರ ಮುಂದು ವರೆಸಿಕೊಂಡು ಬಂದಿದ್ದೇವೆ. ಆದರೆ ಲಿಂಗವಂತರು ಎಂದು ಹೇಳಿಕೊಳ್ಳುವ ಆ ತತ್ವದ ಬಗ್ಗೆ ವಾದಮಾಡುವ ಪೊಳ್ಳು ಪಂಡಿತರು ತಾವಾಗಲಿ ತಮ್ಮ ಮನೆಯ  ಎಲ್ಲ ಸದಸ್ಯರೆಲ್ಲರಾಗಲಿ ಲಿಂಗ ದೀಕ್ಷೆ ಹೊಂದಿದ್ದಾರೆಯೇ ? ಖಾತರಿ ಪಡಿಸಲಿ.ಆಗ ಜಂಗಮರಿಗೆ ಬುದ್ದಿ ಹೇಳಲು ಬರಲಿ.ಹೋಗಲಿ ... ಅವರು ಹೇಳುವ ಲಿಂಗಾಯತ ಧರ್ಮದಲ್ಲಿ ಜಂಗಮರೆಂದರೆ ಯಾರು ? ಅವರೇ ವಿಶ್ಲೇಷಣೆ ಮಾಡುವ ರೀತಿಯ ಜಂಗಮರು ಬೆರಳೆಣಕೆ ಅಷ್ಟಾದರೂ ಹುಡುಕಿ ಕೊಡುತ್ತಾರೆಯೇ?  ಹೋಗಲಿ ತಮ್ಮ ಸ್ವಯಂ ಘೋಷಿತ ಮಠಗಳಲ್ಲಿ ಪೀಠಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಾದರು ಲಿಂಗಾಯತರಾಗಿದ್ದರೆಯೇ ಎಂದು ಎದೆ ಮುಟ್ಟಿಕೊಂಡು ಹೇಳುತ್ತಾರೆಯೇ ? ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತಗೆದು ಇನ್ನೊಬ್ಬರ ತಟ್ಟೆಯ ನೊಣ ತಗೆಯಲು ಹೋಗಲಿ. ಜಗತ್ತಿನಲ್ಲಿ ಸುಂತಿ ಆಗದ ಮುಸಲ ಮಾನನಿಲ್ಲ, ಉಪನಯನ ಮಾಡಿಕೊಳ್ಳದ ಬ್ರಾಹ್ಮಣನಿಲ್ಲ ಅದೇ ರೀತಿ ಪವಿತ್ರ ಸ್ನಾನ ಮಾಡದ ಕ್ರಿಶ್ಚಿಯನ ಇಲ್ಲ. ಅದೇ ರೀತಿ ಒಂದು ಸಣ್ಣ ಧರ್ಮ ದಿಂದಾ ಹಿಡಿದು ಬುಡಕಟ್ಟು ಜನಾಂಗದ ಸಣ್ಣ ಗುಂಪು ಇರುವ ಜನಾಂಗವು ತಮ್ಮ ಆಚರಣೆ ಬಿಟ್ಟಿಲ್ಲ.ಆದರೆ ಲಿಂಗಾಯತರಲ್ಲಿ ಕಡ್ಡಾಯ ಲಿಂಗ ಧೀಕ್ಷೆ ಸಂಸ್ಕಾರ ಮಾಡಿಕೊಂಡವರು ಎಷ್ಟು ಜನರಿದ್ದಾರೆ ಹೇಳಲಿ. ಯಾರ ಎದೆಯ ಮೇಲೆ ಯಾದರು ಲಿಂಗ ಅನ್ನುವದು ಇದ್ದರೆ ಅದು ಅವರೆಲ್ಲ ಹುಟ್ಟಿದಾಗ ಆ ಊರ ಜಂಗಮ ಕಟ್ಟಿದ್ದೆ ಹೊರತು ಬೇರೆ ಯಾರು ಅಲ್ಲ. ಪ್ರತಿ ಹಳ್ಳಿಗೆ ಹೋಗಿ ಲಿಂಗ ಧಾರಣೆ ಮಾಡುವದು ಈ ಪಟ್ಟಾಧಿಕಾರಿಗಳಿಗಾಗಲಿ ಜಗದ್ಗುರುಗಳಿಗಾಗಲಿ ಸಾಧ್ಯವಾಗದೆಂದು ನಮ್ಮನ್ನೆಲ್ಲ ಅಯ್ಯಚಾರ ಮಾಡಿ ಹಳ್ಳಿಯಲ್ಲಿನ ಭಕ್ತರಿಗೆ ಲಿಂಗಕಟ್ಟಲು ಅಧಿಕಾರ ನೀಡಿದರು. ಈ ಒಣ ಅಧಿಕಾರಕ್ಕಾಗಿ ಹೊಲ ಮನಿ ಉದ್ಯೋಗ ವ್ಯಾಪಾರ ಬಿಟ್ಟು ಬಡವರಾಗಿ ಉಳಿಯ ಬೇಕಾಯಿತು.ನಮಗಾದರೂ ಈ ಜಂಗಮ ಪದವಿ ಬೇಕಾಗಿಲ್ಲ ಯಾರು ಬೇಕಾದವರು ಮಾಡಿಕೊಂಡು ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ನಮಗೆ ಹೇಳುವ ಅಧಿಕಾರ ಇವರಿಗೆ ಕೊಟ್ಟವರಾರು ? ಪ್ರಶ್ನಿಸಬೇಕಾಗುತ್ತದೆ. ನಿಮಗೆ ಹಳ್ಳಿಯ ಜಂಗಮರಿಗಿಂತ ಆಳವಾದ ಜ್ಞಾನ ಇರಬಹುದೇ ಹೊರತು ಅವರನ್ನು ಟೀಕಿಸುವ  ಅಧಿಕಾರ ನಮ್ಮ ಗುರು ಪರಂಪರೆಗೆ ಮಾತ್ರ ವಿದೆ ಬೇರೆ ಯಾರಿಗೂ ಇಲ್ಲ. ಬೇರೆ ಧರ್ಮದ ಬಗ್ಗೆ ನಮಗೂ ಚನ್ನಾಗಿ ಗೊತ್ತಿದೆ ಎಂದ ಮಾತ್ರಕ್ಕೆ ಅವರ ಆಚರಣೆಯ ಲೋಪ ದೋಷ ತಿದ್ದಲು ನಮಗೆ ಅಧಿಕಾರವಿಲ್ಲ. ಹಾಗೆಯೇ ಲಿಂಗ ಆಯತ ಮಾಡಿಕೊಳ್ಳದವರು ವೀರಶೈವ ಧರ್ಮದ ಬಗ್ಗೆ ಅಲ್ಲಿರುವ ಕೆಲ ಲೋಪ ದೋಷಗಳ ಬಗ್ಗೆ ಮಾತನ್ನಾಡಿದರೆ ಯಾವನೋ ಯಾವದೋ ಧರ್ಮದ ಬಗ್ಗೆ ಮಾತಾಡಿದಂತಾಗುತ್ತದೆ.ಯಾರಾದರು ಮಾತನಾಡುವವರು ಜಂಗಮರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇಂದ ಮಾತಾಡಲಿ  ಮಾನವ ಧರ್ಮಕ್ಕೆ ಜಯವಾಗಲಿ ಧರ್ಮ ದಿಂದಲೇ ವಿಶ್ವಕ್ಕೆ ಶಾಂತಿ.  ಪಂಚಾಚಾರ್ಯ ರಿಗೆ ಜಯವಾಗಲಿ ಜಂಗಮ ಪ್ರೇಮಿ ಅಣ್ಣ ಬಸವಣ್ಣನವರಿಗೆ ಜಯವಾಗಲಿ. 

ಶನಿವಾರ, ಏಪ್ರಿಲ್ 6, 2013

ಸಮಸ್ತ ಸಮಾಜ ಬಾಂಧವರಲ್ಲಿ ಒಂದು ಮನವಿ

ನಾನು ಈ ಬ್ಲಾಗನಲ್ಲಿ ನಿಮ್ಮೊಂದಿಗೆ ಸಮಾಜದ ಸಂಘಟನೆ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳ ಬಯಸುತ್ತೇನೆ. ವೀರಶೈವ ಜಂಗಮರು ಮುಂದುವರೆದ ಜನಾಂಗದ ಹಣೆ ಪಟ್ಟಿಯೊಂದಿಗೆ ಅತ್ಯಂತ ಹಿಂದುಳಿದ ಸಮಾಜವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜಂಗಮರ ಸ್ಥಿತಿ ಗತಿ ಅತ್ಯಂತ ಹೀನವಾಗಿದೆ. ಶೈಕ್ಷಣಿಕವಾಗಿ,ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜ ವಾಗಿಹೊರಹೊಮ್ಮುತ್ತಿದೆ ಈ ನಮ್ಮ ಜಂಗಮಸಮಾಜ . ಪರಂಪರೆಯಿಂದ ಬಂದ ಕಾಯಕವನ್ನೇ ನಂಬಿ ಬದಕುವದು ಅಸಾಧ್ಯವಾಗಿದೆ. ಸರಕಾರದ ದೃಷ್ಟಿಯಲ್ಲಿ ನಾವು ಮುಂದುವರೆದ ಜನಾಂಗ ವಾಗಿರುವದರಿಂದ ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹಳ್ಳಿಯ ಈ ಬಡ ಜಂಗಮರಿಗೆ ಹಿಂದಿನಿಂದ ಮಾಡಿಕೊಂಡು ಬಂದ ಕಾಯಕ ಬಿಟ್ಟರೆ ಬೇರೆ ಯಾವ ಕೆಲಸ ಮಾಡಲು ಇವರಿಗೆ ಬರುದಿಲ್ಲ ಅಥವಾ ಬೇರೆಯೇನಾದರೂ ಮಾಡಿ ಆರ್ಥಿಕವಾಗಿ ಬಲಿಷ್ಠವಾಗ ಬೇಕೆಂದರೆ ಕೆಲವರಿಗೆ ಸ್ವಾಭಿಮಾನ ಕಾಡಿದರೆ ; ಕೆಲವರಿಗೆ ಈ ಸಮಾಜ ಬಿಡುತ್ತಿಲ್ಲ. ಮಕ್ಕಳಿಗಾದರೂ ಉನ್ನತ ಶಿಕ್ಷಣ ಕೊಡಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆಂದರೆ ಆರ್ಥಿಕ ಶಕ್ತಿ ಇವರ ರಟ್ಟೆಯಲ್ಲಿ ಇಲ್ಲಾ.
ವೀರಶೈವ ಧರ್ಮದಲ್ಲಿ ಜಂಗಮರಿಗೆ ಗೌರವ ಕಡಿಮೆಯಾಗುತ್ತಿದೆ. ಅಥವಾ ಈ ಗೌರವ ಕಡಿಮೆ ಮಾಡಲಾಗುತ್ತಿದೆ. ಇದಕ್ಕೆ ಬೇರೆಯಾರು ಕಾರಣರಲ್ಲಾ ನಮ್ಮಕುಲದಲ್ಲೇ ಹುಟ್ಟಿ ಅಥವಾ ಈ ಕುಲದಲ್ಲಿ ಹುಟ್ತಿದ್ದಕ್ಕಾಗಿಯೇ ಮಠಾಧಿಪತಿ,ಪೀಠಾಧಿಪತಿಗಳಾಗಿರುವ ಕುಲವೈರಿಗಳೇ ಕಾರಣ. ಕೆಲವು ಮಹಾಸ್ವಾಮಿಗಳOತು ಈ ಬಡಜಂಗಮರನ್ನು ಪುರೋಹಿತ ಶಾಯಿಗಳೆಂದು ಕರೆದು, ಇವರು ಜಂಗಮರೇ ಅಲ್ಲಾ ಇವರನ್ನು ಯಾರು ಊಟಕ್ಕೂ ಕರೆಯ ಬೇಡಿರಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕೆಲವರ ಕಾರಣದಿಂದಾಗಿ ವೀರಶೈವ ಸಮಾಜ ಒಡೆದು ಚೂರು ಚೂರಾಗುತ್ತಿದೆ. ಜಾತಿಗೊಬ್ಬ ಜಗದ್ಗುರು ಹುಟ್ಟಿ ಕೊಳ್ಳುತ್ತಿದ್ದಾರೆ .ಪಂಚ ಪೀಠಗಳ ಸೂತ್ರಾನುವರ್ತಿಗಳೆಂದು ಹೇಳಿಕೊಳ್ಳುವ ಈ ಜಂಗಮರಿಗೆ ಪಂಚ ಪೀಠಗಳೂ ಕೈ ಹಿಡಿಯುವ ಕೆಲಸ ಮಾಡುವದಿರಲಿ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲಾ. ಯಾಕಂದರೆ ಈ ಬಡ ಜಂಗಮ ರಿಂದ ಯಾವುದೇ ಲಾಭ ಇವರಿಗೆ ಇಲ್ಲಾ. ಕೆಲವು ಮಠಗಳಲ್ಲಿ ವೈದಿಕ ಜ್ಯೋತಿಷ ಉಚಿತ ಪಾಠ ಶಾಲೆಯಲ್ಲಿ ಪ್ರವೇಶ ನೀಡಿ ಮಠದ ಚಾಕರಿ ಮಾಡಿಸಿಕೊಳ್ಳುತ್ತಿದ್ದಾರೆ ಹೊರತು ಇದು ಉಪಕಾರವೇ ಅಲ್ಲಾ. ಈ ವಿದ್ಯಯಿಂದ ಯಾವ ಲಾಭವು ಇಲ್ಲಾ . ಹೊಟ್ಟೆ ತುಂಬಿಸದ ಈ ವಿದ್ಯಉಚಿತವಾಗಿ ನೀಡಿ ಫಲವೇನು? ನಿಜ ಹೇಳ ಬೇಕೆಂದರೆ ಈ ಜಂಗಮರು ನೀಜವಾಗಿಯು ಪ್ರತಿಭಾವಂತರಿರುತ್ತಾರೆ ಆದರೆ ಅವರು ಉನ್ನತ ಶಿಕ್ಷಣದಿಂದ ವಂಚಿತರಗುತಿದ್ದಾರೆಇತ್ತೀಚಿಗೆ ಕೆಲವು ಸಮಾಜದ ಪ್ರಜ್ಞಾವಂತರು ಈ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಪ್ರಯತ್ನ ಪಡುತ್ತಿರುವಾಗ ನಮ್ಮ ಕುಲದಲ್ಲಿಯೇ ಹುಟ್ಟಿ ಉನ್ನತ ಮಠ ಪೀಠವನ್ನು ಏರಿದ ಕೆಲವು ಮಠ ಪೀಠಾಧಿಶರು ಬೇರೆ ಹಿಂದುಳಿದ ವರ್ಗದ ಜನರನ್ನು ಎತ್ತಿ ಕಟ್ಟಿ ನಿಮ್ಮ ಮೀಸಲಾತಿಯನ್ನು ಕದಿಯಲು ಬಂದಿದ್ದಾರೆ ಎಂದು ಪ್ರತಿಭಟನೆಗೆ ಇಳಿಸಿ ತಾವೇ ಮುಂಚೊಣಿಯಲ್ಲಿ ನಿಂತು ಹೋರಾಟ ಮಾಡಿದ್ದರೆ. ಹೊರಗಿನ ವೈರಿಗಳನ್ನು ಎದುರಿಸಬಹುದು ಆದರೆ ಹಿತಶತ್ರುಗಳನ್ನು ಎದುರಿಸುವದು ಹೇಗೆ ಸಾಧ್ಯ. ಹೀಗಾಗಿ ನಮ್ಮ ವೈರಿಗಳು ಹೊರಗಿಲ್ಲ ಒಳಗೆಯಿದ್ದಾರೆ. ನಮ್ಮ ಸಮಾಜದ ಪ್ರಥಮ ಮತ್ತು ಕೊನೆಯ ವೈರಿಗಳೆಂದರೆ ನಮ್ಮಕುಲದವರೆಯಾದ ಕೆಲವು ಮಠಾಧಿಶರು. ಹೀಗಾಗಿ ಜಂಗಮರ ಸಂಘಟನೆಯಾಗಬೇಕಾಗಿದೆ. ಗುರು ವಿರಕ್ತ ಪರಂಪರೆಯ ಯಾವ ಒಂದು ನಿರ್ಧಿಷ್ಠ ಪಂಗಡಕ್ಕೆಅಂಟಿಕೊಳ್ಳದೆ ಸಂಘಟಿತರಾಗಬೇಕಾಗಿದೆ.ಈ ಸಂಘಟನೆಯ ಹೆಸರು ಅಖಿಲ ಭಾರತ ವೀರಶೈವ ಜಂಗಮ ಸಮಾಜ ಮಹಾ ಸಭಾ ಎಂದು ಹೆಸರಿಡಲಾಗಿದೆ. "ನಮ್ಮಉಧ್ಧಾರ ನಮ್ಮ ಕೈಯಲ್ಲಿ "ಎಂಬುದು ನಮ್ಮ ಧ್ಯೇಯ ವಾಕ್ಯ. ಜಂಗಮ ಸಮಾಜದ ಶೈಕ್ಷಣಿಕ ,ಸಾಮಾಜಿಕ,ಆರ್ಥಿಕ ಪ್ರಗತಿಯೇ ನಮ್ಮಗುರಿ.ಈ ನಮ್ಮ ವಿಚಾರಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿರಿ.ನಮ್ಮ